ಯಕ್ಷಗಾನಕ್ಕೆ ಸರಕಾರದಿಂದ ಪ್ರೋತ್ಸಾಹ ದೊರೆಯಲಿ : ಪ್ರಭಾಕರ ಜೋಷಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಜನವರಿ 14 , 2015
|
ಜನವರಿ 15, 2015
|
ಯಕ್ಷಗಾನಕ್ಕೆ ಸರಕಾರದಿಂದ ಪ್ರೋತ್ಸಾಹ ದೊರೆಯಲಿ : ಪ್ರಭಾಕರ ಜೋಷಿ
ಕಟೀಲು :
ಯಕ್ಷಗಾನ ಅಕಾಡೆಮಿಯ ಕಾರ್ಯಕ್ರಮಗಳು ಚಿಂತನೆ, ಅಧ್ಯಯನ, ಸಂಶೋಧನೆಗೆ ಪೂರಕವಾಗಿರಬೇಕು, ಸಂಗ್ಯಾ ಬಾಳ್ಯ ದೊಡಾrಟದಂತಹ ಕಲಾಪ್ರಕಾರಗಳಿಗೆ ಸರಕಾರದಿಂದ ಪ್ರೋತ್ಸಾಹ ದೊರೆಯ ದಿದ್ದರೆ ಮುಂದಿನ 10 ವರ್ಷಗಳಲ್ಲಿ ಯಕ್ಷಗಾನ ಮರೆಯಾಗಲಿವೆ ಎಂದು ಯಕ್ಷಗಾನ ವಿಮರ್ಶಕ ಡಾ| ಎಂ. ಪ್ರಭಾಕರ ಜೋಷಿ ಹೇಳಿದರು.
ಅವರು ಜ. 11 ಕಟೀಲು ದೇವಳದ ಸರಸ್ವ ತಿ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಹಾಗೂ ಕಟೀಲು ದೇವಳ ಶ್ರೀ ದುರ್ಗಾ ಮಕ್ಕಳ ಮೇಳ ಇದರ ಆಶ್ರಯದಲ್ಲಿ ಯಕ್ಷಗಾನ ಬಯಲಾಟ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶಿಖರೋಪನ್ಯಾಸ ಭಾಷಣಗೈದು ಮಾತನಾಡಿದರು.
ಸಚಿವ ಅಭಯಚಂದ್ರ ಜೈನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಷ್ಟಿಯ ಕಲೆ ಯಕ್ಷಗಾನವಾಗಿದೆ ಇದರ ಹಿಂದೆ ಇದ್ದ ಸಾಧಕರ ಶ್ರಮ ದೊಡ್ಡದು ಎಂದರು. ಕಟೀಲು ದೇವಳದ ಅರ್ಚಕರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮಾನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ , ವಿದ್ವಾನ್ ಪಂಜ ಭಾಸ್ಕರ ಭಟ್, ಯಕ್ಷಗಾನ ವಿದ್ವಾಂಸ ಡಾ| ಎನ್. ನಾರಾಯಣ ಶೆಟ್ಟಿ , ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿ , ಯಕ್ಷಗಾನ ಅಕಾಡೆಮಿಯ ಸದಸ್ಯ ಕೆ. ಎಂ. ಶೇಖರ್ಉಪಸ್ಥಿತರಿದ್ದರು. ತಾರಾನಾಥ ವರ್ಕಾಡಿ ವಂದಿಸಿದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಕೃಪೆ :
http://udayavani.com
|
|
|